ಬಯಸದೇ ಬರುವ
ಯೋಚನೆಗಳಿಂದ ಬೇಸತ್ತು
ಬಯಸಿಯೂ ಮಾಡಲಾಗದ
ಕಾರ್ಯಗಳಿಂದ ನೊಂದ ಜೀವನ
ಹುಚ್ಚು ಮನಸಿನ ನೀಚ
ವಿಚಾರಗಳ ಬೆನ್ನತ್ತು
ಅಂಧಕಾರದ ಕೂಪದಲ್ಲಿ
ಮುಳುಗಿದ ಜೀವನ
ಗುರುವೇ, ನನಗೆ ಬೇಡ ನಾನು
ಆದರೆ ಬೇಕು ನೀನು
ಬೆಳಕಿನಲ್ಲೂ ಕತ್ತಲೆಯ
ಕಾಣುತ್ತಿದ್ದೇನೆ, ಮುನ್ನಡೆಸು
ನಾ ಕಣ್ಣು, ನೀ ದ್ರಷ್ಟಿಯಾಗು
ನಾ ಬಾಯಿ, ನೀ ಮಾತಾಗು
ನಾ ಕರ್ಣ, ನೀ ಶಬ್ದವಾಗು
ನಾ ಹ್ರದಯ ನೀ ಪ್ರೀತಿಯಾಗು
No comments:
Post a Comment